Thursday, October 29, 2009

ಮರಳಿ ಬಾ ವಸಂತವೇ..


ನೆಡವದಾರಿ ಮುಳ್ಳಾಗಿದೆ
ನೆಡವಪಾದ ಸೋತು ಹೋಗಿದೆ
ಬಿಸಿಲು ಬೆಂಕಿಯಂತೆ ಉರಿಯುತ್ತಿದೆ
ಬಿಸುವ ತಂಗಾಳಿ ಬಿರುಗಾಳಿಯಾಗಿದೆ
ಗಿಡ ಮರಗಳು ಬಾಡಿ ಸೊರಗುತ್ತಿವೆ
ಹಾಡುವ ಕೋಗಿಲೆ ಮಂಕಾಗಿದೆ
ವಸಂತಕ್ಕಾಗಿ ಅಂಬಲಿಕೆ ಹೆಚ್ಚಾಗಿದೆ

ಬರಡಾದ ಭೂಮಿ ಬಿರುಕು ಬಿಡುವ ಮುನ್ನ
ಹಸಿರೊತ್ತ ಪೈರು ಬಾಡಿ ಹೋಗುವ ಮುನ್ನ
ಉಸಿರು ನಿಂತು ದೇಹ ಮಣ್ಣಾಗುವ ಮುನ್ನ
ಬದುಕು ಮರೆಯಾಗಿ ಕಣ್ಣು ಮಂಜಾಗುವ ಮುನ್ನ

ಅಮೃತ ಬಿಂದುವಿನಂತೆ ಬಾ... ಧರೆಗೆ
ಜೀವ ಜಲದಂತೆ ಸುರಿ...ಇಳೆಗೆ
ಚೈತನ್ಯದ ಸೆಲೆಯಾಗಿ ಬಾ...ಬಾಳಿಗೆ
ಮರಳಿ ಬಾ..ವಸಂತವೇ..ಮತ್ತೆ ಮರಳಿ ಬಾ........

ಮನದ ಮುಂಗಾರು


ನವ ಮುಂಗಾರಿನಂತೆ ಮಧುರವಾಗಿ ಬಂದೆ
ಗುಡುಗು ಸಿಡಿಲಿನಂತೆ ಅರ್ಭಟಿಸಿ ಮಿಂಚಿ ಮರೆಯಾದೆ.....

ಕಣ್ಣಿಗೆ ಕಾಣುವ ಮೊದಲು ಮನದ ಹೊಸ್ತಿಲ ದಾಟಿ ಬಂದೆ
ಭಾವ ಸರೋವರಕ್ಕೆ ಕಲ್ಲೇಸೆದು ನೆನಪಾಗಿ ದೂರ ಹೋದೆ....

ಬರುವಾಗ ಸೋನೆಯಾಗಿ ಬಂದೆ
ಹೋಗುವಾಗ ರಭಸವಾಗಿ ಸುರಿದು ಬಂದನಕ್ಕೆ ಸಿಗದೆ ಕೊಚ್ಚಿ ಹೋದೆ...

ಕಾಮನ ಬಿಲ್ಲಂತೆ ಕಣ್ಣಿಗೆ ಕಂಡೆ
ಕಣ್ಣಲ್ಲಿ ನಿಲ್ಲುವ ಮೊದಲೆ ಕಾಣದೆ ಕರಗಿ ಹೋದೆ.....

ಹಿಡಿಕೆಯಷ್ಟಿರುವ ಹೃದಯಕ್ಕೆ ನೀ ಗಾಯವ ಮಾಡಿದೆ
ಅದು ವಾಸಿಯಾಗುವ ಮೊದಲೆ ನೀ ಕಣ್ಮರೆಯಾದೆ.......

Tuesday, October 27, 2009

ಜೀವ ಸಖಿ.......



ಮರೆಯಲಾರದ ನೆನಪು ತಂದವಳೆ..
ಮರೆಯಲಾರೆನು ನಿನ್ನ ನಾನು.....

ನಲಿವಿಗೂ ಮಿಗಿಲಾಗಿ ನೋವು ತಂದವಳೆ..
ತೊರೆಯಲಾರೆನು ನಿನ್ನ ನಾನು...

ಕನುಸುಗಳ ಕಲ್ಪನೆಗಳ ತಂದವಳೆ..
ನನಸಾಗುವವರೆಗೂ ಬಿಡೆನೂ ನಾನು....

ನಿನದು....


ಈ ಜೀವಾ ನಿನದು..
ಈ ಜೀವನವು ನಿನದು....

ಈ ಹೃದಯ ನಿನ್ನದು..
ಈ ಹೃದಯದ ಬಡಿತವು ನಿನದು...

ಈ ಚಿತ್ತವು ನಿನ್ನದು..
ಈ ಚಂಚಲವು ನಿನದು...

ಈ ಪ್ರೀತಿ ನಿನದು..
ಈ ಅನುರಾಗವು ನಿನದು...
ಈ ಮಾತು ನಿನದು..
ಈ ಮೌನವು ನಿನದು...

Monday, October 26, 2009

ಕಲ್ಪನ.......


ಮನೆಸ್ಸೆಂಬ ಆಕಾಶದಲ್ಲಿ ಭಾವನೆಗಳೆಂಬ ಕಾರ್ಮುಗಿಲು ಕವಿದು
ಅಕ್ಷರಗಳೆಂಬ ಮಳೆಯಾಗಿ ಸುರಿದು
ಸಾಲುಗಳೆಂಬ ಮಳೆಯಾಗಿ ಹರಿದು
ಸಂಗ್ರಹ ಎಂಬ ಸಾಗರ ಸೇರಲು
ಓಡೋಡಿ ಬರುತಿಹವು
ನಿಲ್ಲಿಸಬೇಡಿ ಅವುಗಳನ್ನು ತಡೆದು
ಅವು ಹರಿಯಲಿ ಕವನಗಳಾಗಿ.

ಮಾಯೆ.............



ಬರಡಾದ ನನ್ನೆದೆಯ ಮೇಲೆ
ಮಳೆ ಹನಿ ಕರೆದೆ ಏಕ?

ಅಲ್ಲಿ ಪ್ರೀತಿಯ ಬೀಜವ ಬಿತ್ತಿ
ಮರವಾಗಿ ಬೆಳೆಸಿದ್ದು ಏಕೆ?

ಪ್ರೀತಿ ಫಲ ಕೊಡುತ್ತದೆ ಎಂದು ಕೊಂಡಾಗ
ಕರುಣೆಯಿಲ್ಲದೆ ಕಡಿದು ಹಾಕಿದ್ದು ಏಕೆ?

ಇಂದಿಗೂ ನಿನ್ನ ಮಾಯೆ
ನನಗೆ ತಿಳಿದಿಲ್ಲವೇಕೆ?